ಇಲ್ಲಿ ಹರಿದ ಅಂಗಿಯ ಬಗ್ಗೆ ಆಡಿಕೊಳ್ಳುವುದಿಲ್ಲ….!

2 10 2010

          ಎಲ್ಲಿದ್ದಿಯಾ..? ಹೀಗೆ ನಿನ್ನ ನೋವಿಗೆ ನಲಿವಿಗೆ ನಾನಿದ್ದೇನೆ ಕಣೋ..ಎಂದು ಅವತ್ತು ಇಳಿ ಸಂಜೆಯಹೊತ್ತಲ್ಲಿ ನಿನ್ನ ಮುಂಗುರುಳ ಸರಿಸುತ್ತ ಕಣ್ಣ ಕೊನೆಯಲ್ಲೇ ಭಾಷೆ ನೀಡಿ,ಅದೆಲ್ಲಿ ಕಾಣೆಯಾದೆ..?ಗೊತ್ತಿಲ್ಲದ ಊರಿನ ಆ ರೈಲು ನಿಲ್ದಾಣದ ಮುಂಬಾಗಿಲ ಬಳಿ ನಿಂತು ನನ್ನ ಸ್ವಾಗತಿಸಿದ್ದೆಯಲ್ಲ..? ನಿನ್ನೆ ನಾನು ಆ ಜಾಗದಲ್ಲಿ ಅದೆಷ್ಟೋ ಹೊತ್ತು ಸುಮ್ಮನೇ ನಿಂತು ಬಂದೆ ಗೊತ್ತಾ..? ಅದೇನೋ ನಿನ್ನ ನೆನಪು ಎದೆಯ ಮಿದುವಿಗೆ ಮೃದುವಾಗಿ ಹಿತವಾದ ಯಾತನೆ ನೀಡುತ್ತಿದೆ.ನನ್ನ ಪಾಲಿಗೆ ಬದುಕೇ ಮುಗಿದಿತ್ತು.ನನ್ನ ಊರು,ಜನ,ಮನೆಯೆ ಮಂದಿ ಎಲ್ಲರೂ ನಿಕೃಷ್ಟವಾಗಿ ಕಾಣುತ್ತಿದ್ದ ಘಳಿಗೆಯಲ್ಲಿ; ನಾನು ಸಮಾಧಿ ಸೇರುವ ಸಂದಭ೯ದಲ್ಲಿದ್ದೆ,ಅದ್ಯಾವ ಮಾಯವೋ..! ನಿನ್ನ ದೂರವಾಣಿ ಕರೆ, ಆ ಘಳಿಗೆಯಲ್ಲಿ ನನ್ನ ಸಾವನ್ನ ಮರೆಸಿತ್ತು.”ಬಂದು ಬಿಡು ಮಿತ್ರಾ..ನಮ್ಮೂರಿಗೆ,ಬೆಂಗಳೂರೆಂಬುದು ನಿನ್ನಂಥ ನೊಂದವರಿಗೆ, ಹತಾಶರಿಗೆ, ಅವಮಾನಿತರಿಗೆ ನೆಮ್ಮದಿಯ ತಾಣ.ಇಲ್ಲಿ ನಿನ್ನಿಷ್ಟದ ಹಾಗೆ ಬದುಕಬಹುದು. ನಿನ್ನ ಪ್ರತಿ ಚಲನ ಗಮನಿಸಿ ಚಾಡಿ ಹೇಳುವರಿರುವುದಿಲ್ಲ.ನಿನ್ನ ಹರಿದ ಅಂಗಿಯ ಬಗ್ಗೆ ಆಡಿಕೊಳ್ಳುವುದಿಲ್ಲ. ನಿನ್ನ ಜೊತೆಗಿದ್ದ ಹುಡುಗಿ ಯಾರೆಂದು ಯಾರೂ ಪ್ರೆಶ್ನೆಸಿವುದಿಲ್ಲ.ಉಂಡೆಯಾ..ಮತ್ತೇನಾದರೂ ಕಂಡೆಯಾ..? ಹು..ಹುಂ..! ಯಾರೂ ಏನೂ ಕೇಳುವುದಿಲ್ಲ.ಇಲ್ಲಿ ಒಬ್ಬಿಬ್ಬರು ಬಲ್ಲವಿರಿದ್ದರೆ ಬೆಂಗಳೂರೆಂಬದು ಬೆಲ್ಲಂದಂಥದ್ದು ಮಹರಾಯ..ಬಂದು ಬಿಡು.” ಎಂದೆಯಲ್ಲಾ..! ನಿನ್ನ ಆ ನಿಷ್ಕಲ್ಮಷ ಮಾತೇ ನನ್ನ ನಿನ್ನೂರಿಗೆ ಬರುವಂತೆ ಮಾಡಿದ್ದು ಮತ್ತು ಹಿಡಿ ಅನ್ನ ನೀಡಿದ್ದು.ನಿನ್ನ ಹಾಗೂ ನಿನ್ನ ಬೆಂಗಳೂರನ್ನ ನಾ ಹೇಗೆ ಮರೆಯಲಿ ಗೆಳತಿ..? ಭಾವುಕರಿಲ್ಲದ ಯಾಂತ್ರಿಕ ನಗರ ಎಂದುಕೊಂದಿದ್ದೆ;ನನ್ನ ಹೂಯೆ ತಪ್ಪಾಯಿತು, ಇಲ್ಲಿ ಎಲ್ಲಾ ಇದೆ.ಅದು ನೋಡುವ ಕಣ್ಣಲ್ಲಿ ಮತ್ತು ಬದುಕುವ ಕ್ರಿಯೆಯಲ್ಲಿ ಅಡಗಿದೆ ಎಂಬುದಂತೂ ಸುಳ್ಳಲ್ಲ.ಅದೆಲ್ಲಾ ಸರಿ ಉಳಿಯಲು ನಿನಗೆ ಗೊತ್ತಿದ್ದ ಹುಡುಗನೊಬ್ಬನ ಸೂರಿಗೆ ಬಿಟ್ಟೆ.ಮಾಡಲು ಅದ್ಯಾರನ್ನೋ ಕೈ ಹಿಡಿದು ಕೆಲಸ ಗಿಟ್ಟಿಸಿ ಕೊಟ್ಟೆ.ಬಿಡುವಿದ್ದಾಗೆಲ್ಲಾ ಜೊತೆಗಿದ್ದು ನಿನ್ನೂರಿನ ನ್ಯೂನ್ನತೆ..ಪ್ರೆತಿಷ್ಠೆ..ಗತ್ತು,ದೌಲತ್ತು..ಪ್ರೀತಿ ಎಲ್ಲವನ್ನೂ ಪರಿಚಯಿಸಿದೆ.ಆದರೆ ಈಗ ಅದೆಲ್ಲಿ ಹೋದೆ ಗೆಳತಿ..? ಕಷ್ಟದಲ್ಲಿದ್ದಾಗ ಕಣ್ಣೀರ ಒರೆಸಿ,ಸಂತಸದ ಮಗ್ಗುಲಿಗೆ ಬದಲಿಸಿ, ಹೀಗೇ ಸುಖಾ ಸುಮ್ಮನೆ ಗೆದ್ದು ನಿಲ್ಲುವ ಹೊತ್ತಲ್ಲಿ ಎದ್ದು ಹೋದರೆ ಏನನ್ನಲಿ..? ನನಗೆ ನಿನ್ನ ಗುರಿ,ಬದುಕುವ ಪರಿ ಅಷ್ಟಾಗಿ ಗೊತ್ತಿಲ್ಲ ನಿಜ, ಆದರೆ ನಿನ್ನೊಳಗಿನ ಕಾಳಜಿ,ಜೀವನ್ ಪ್ರೀತಿ ಅದಿನ್ನೆಂಥಹದ್ದು ಎಂಬುದು ಖಂಡಿತಾ ಗೊತ್ತಿದೆ. ಅದ್ಯಾರನ್ನೋ..ಪ್ರೀತಿಸುತ್ತೇನೆ,ಪ್ರೀತಿಸುತ್ತೇನೆ ಅನ್ನುತ್ತಲೇ ಅವನ್ಯಾರೆಂದೂ ಹೇಳಲಿಲ್ಲ.ಬಿಡು,ಗೆಳೆಯನನ್ನೇ ಇಷ್ಟೊಂದು ಪ್ರೀತಿಸುವುವಳು;ಪ್ರಿಯಕರನಿಗಿಗೆ ಅದಿನ್ಯಂಥಹ ಪ್ರೀತಿ ಕೊಡುತ್ತೀಯೆಂದು ನಾನು ಊಹಿಸಬಲ್ಲೆ.ಪ್ರಾಯಶಃ ನೀನೀಗ ಅವನ ಹುಡುಕಾಟದಲ್ಲೋ..ಅಥವ ಅವನ ಸನಿಹದಲ್ಲೋ..ಈ ಗೆಳೆಯನಿಂದ ದೂರವಿರುವಿಯಾದರೆ, ನಿಜಕ್ಕೂ ನನಗೆ ಸಂತಸವೇ…! ನಾನೀಗ ನನ್ನ ಊರಿಗೆ ಹೊರಡಲಿದ್ದೇನೆ ಹೋಗುವ ಮುನ್ನ ನಿನ್ನ ಕಣ್ತುಂಬ ನೋಡಬೇಕೆನ್ನುವ ತುಡಿತ.ಸಾಧ್ಯವಾದರೆ ನಾಳೆ ಸಂಜೆ ಬರಮಾಡಿಕೊಂಡ ನಿಲ್ದಾಣಕ್ಕೆ; ನನ್ನ ಬೀಳ್ಕೊಡಲು ಖಂದಿತಾ ಬರುತ್ತಿ ತಾನೇ,,? ನಾಳೆಯ ಒಳಗೆ ನಾನು ಹೋಗುತ್ತಿರುವುದು ನಿನಗೆ ತಿಳಿಯದಿದ್ದರೆ; ನನ್ನೂರಿಗೆ ನಿನ್ನ ಲಗ್ನ ಪತ್ರಿಕೆ ಕಳಿಸುವುದ ಮರಿಬೇಡ.ಮದುವೆಯ ಮಂಟಪದಲ್ಲಿ ನಿನ್ನ ಅವನನ್ನ ಕಣ್ತುಂಬ ನೋಡಿ ಖುಷಿ ಪಡುತ್ತೇನೆ.
ಎಲ್ಲಿದ್ದರೂ ನಿನ್ನ ಬದುಕು ಬಂಗಾರವಾಗಲಿ ಗೆಳತಿ.
                                           -ವಂದನೆಗಳೊಂದಿಗೆ ನಿನ್ನ ಗೆಳೆಯ……………………………!


ಕ್ರಿಯೆಗಳು

Information

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s




%d bloggers like this: