ಸಿಪ್ಪೆ ಸುಲಿಯದ ಕಡಲೆ…!
……………………….
ಸೋತವನಿಗೆ ಸತ್ತವನ ಕತೆ ಹೇಳಿ
ಸತ್ಯ ಮುಚ್ಚಿಡುವುದು
ಬಲೂನಿನ ಮುಕುಳಿ ಜಗ್ಗಿ..
ಗಾಳಿ ತುಂಬಿ ಕೈ ಬಿಟ್ಟಂತಲ್ಲ..!
ಹಗಲ ದುಡಿಮೆಗೆ,
ಇಲ್ಲಿ ಬೆವರಿಗೂ ಬರ.
ಹುಟ್ಟಿದ ಮಗುವ ಹೋಲಿಕೆ ನೋಡಿ
ಸಂಬಂಧ ಕಟ್ಟುವವರಿಗೂ..
ನೀಡಬೇಕಿದೆ ಮುಗುಳ್ನಗೆ.
ಯಾರೋ ಕಟ್ಟಿದ ಸಪ್ಪಿನ
ಸಿವುಡಿಗೆ ನನ್ನ ಮನೆಯೊಳಗೆ
ಘಮ್ಮನೆಯ ಒಗ್ಗರಣೆ,
ಬದುಕು ಸಿಪ್ಪೆಸುಲಿಯದ ಕಡಲೆ..!
ಹಣ್ಣಾಗಲು ಒತ್ತೆ ಇಟ್ಟು ಮರೆತ ಮಾವು;
ಮತ್ತೆಲ್ಲೋ ಮರವಾಯಿತಂತೆ,
ನೆರೆಳಿಗೆ ಮಲಗಿ ಬಂದವನು
ಮತ್ತೆ ಮತ್ತೆ ಒತ್ತಿ ಹೇಳುತಿದ್ದಾನೆ.
ಹರಿದ ಅಂಗಿ ಹುಡುಕುತ್ತಿದ್ದೇನೆ,
ರಂಗಿನೋಕುಳಿಗೆ,ಗಂಟು ಸಿಗುತ್ತಿಲ್ಲ.
ಆಕೆ ಬರುವ ಹೊತ್ತಾಯಿತು,
ಮರೆತರೆ ಮೈಯಲ್ಲಾ ಬಣ್ಣ..!
ನಾಗು,ತಳವಾರ್.
ನಿಮ್ಮದೊಂದು ಉತ್ತರ