ರಾಜ್ಯ ಭಾರ…!
……………………..
ನನ್ನ ಹುಟ್ಟಿಗೆ ಬೆತ್ತಲೆಯೇ
ಕಾರಣ ಎಂಬುದಾದರೆ,
ನನ್ನೊಳಗೆ ಮಹಾವೀರನ ಬದಲಿಗೆ
ಬುದ್ಧ ಬಂದದ್ದೇಕೋ..ತಿಳಿಯುತ್ತಿಲ್ಲ.
ಕೃಷ್ಣ ಕೊಟ್ಟ ಸವೆಯದ
ಸೀರೆಯನ್ನ ದ್ರೌಪದಿ
ಕಳೆದುಕೊಂಡಿದ್ದಾಳಂತೆ..
ಪಾಪ ನಾರಿಯರೆಲ್ಲಾ ಅಲ್ಲಲ್ಲಿ ಬಿಕನಿತೊಟ್ಟು
ಅಲೆಯುವಂತಾಗಿದೆ…!
ಪಾಂಡವರಿಗೆ ಮತ್ತೆ ವಾನವಾಸವೇನೋ..?
ಅವರೆಲ್ಲಾ ಬೀದಿ,ಬೀದಿಯಲ್ಲಿ ವೇಷ ತೊಟ್ಟು;
ಭಿಕ್ಷೆಗಿಳಿದಿದ್ದಾರೆ.ಈಗ ಧುರ್ಯೋಧನ,ಕೀಚಕ,
ಶಕುನಿಂಥವರದ್ದೇ ರಾಜ್ಯ ಭಾರ…!
ನಾಗು,ತಳವಾರ್.
ನಿಮ್ಮದೊಂದು ಉತ್ತರ