ನಾನೀಗ ಬಂಧಿ..!
………………………
ಸೂರ್ಯನಿಗೆ ಜಗ ಬೆಳುಗುವ
ಹುಚ್ಚೇ ನಿಲ್ಲಲ್ಲೊಲ್ಲದು.
ಅವನುಗುಳಿದ ಉಗುಳ
ಒರೆಸಿಕೊಳ್ಳುತ್ತಲೇ,ಈ ಜನರ ಜಗತ್ತು
ಜಾತ್ರೆಯಂತೆ ಸಾಗುತ್ತಿದೆ.
ನಾವು ಬಾಯಿಂದ ತಿಂದದ್ದು
ಪಚನವಾಗಿ ಹಿಂದಿಂದ ಹೋಗಿ
ಹಂದಿಗೆ ಅನ್ನವಾಗುತ್ತಲೇ ಇದೆ.
ಇವನ್ಯಾರೋ..ಇಲ್ಲಿ ಬನ್ನಿ ಮರದಲ್ಲಿದ್ದ
ಶಸ್ತ್ರಾಸ್ತ್ರಗಳನ್ನೆಲ್ಲಾ ಮಿನಾರ ತುದಿಗೆ ಹೊತ್ತೊಯ್ದು
ಹುಟ್ಟಿದ ಮಕ್ಕಳಿಗೆ ಅಪ್ಪನಾಗಲು ಬಯಸುತ್ತಾನೆ.
ನನ್ನ ತುಫಾಕಿಯ ಕೊಳವಿಯೊಳಗೆ
ಗುಂಗಾಡಿ ಗೂಡು ಕಟ್ಟಿದೆ,ಯುದ್ಧ ಬೇಡವೆಂದರೂ..
ಅವ್ವಳ ಹಾಲಿಲ್ಲದ ತೊಗಲ ಚೀಲಕೆ ಕೈ ಹಾಕಿದವನ
ಏನ ಮಾಡಲಿ…?
ನನ್ನ ಉಡುದಾರದಿಂದ ಅವನ ಕೈ ಕಟ್ಟಿ,
ಜನಿವಾರದಿಂದ ಉರುಳೆಳೆದು,ಕೆಂಪು ವಸ್ತ್ರದಲಿ ಸುತ್ತಿಟ್ಟದ್ದಕ್ಕೆ
ನಾನೀಗ ಕೊಳತೊಡಿಸಿಕೊಂಡ ಬಂಧಿ….!
ನಾಗು,ತಳವಾರ್.
ನಿಮ್ಮದೊಂದು ಉತ್ತರ